ಬೇಲೂರು : ತಾಲೂಕಿನ ಹಳೆಬೀಡು ಹೋಬಳಿಯ ಚೀಲನಾಯಕನಹಳ್ಳಿ ಗ್ರಾಮದ ಫಾರಂ ಗಡಿ ಮೋಹನ್ ರಾಜ್ ಅವರಿಗೆ ಸೇರಿದ ಜಾಗದ ತಂತಿ ಬೇಲಿಗೆ ಸಿಕ್ಕಿಹಾಕಿಕೊಂಡು ಚಿರತೆಯೊಂದು ಮೃತಪಟ್ಟರುವ ಘಟನೆ ನಡೆದಿದೆ. ಬೇಟೆಗಾಗಿ ದುಷ್ಕರ್ಮಿಗಳು ಉರುಳು ಹಾಕಿದ್ದಾರೆಂದು ತಿಳಿದುಬಂದಿದೆ. ಚಿರತೆ ಆಹಾರ ಅರಸಿ ಬಂದು ನುಸುಳಿದಾಗ ಈ ದುರ್ಘಟನೆ ಆಗಿದೆ.ಸ್ಥಳಕ್ಕೆ ಅರಣ್ಯಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿಗೆ ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಜನರು ಪ್ರಾಣಭಯದಿಂದ ಓಡಾಡುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೆ ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ.