ಬೆಂಗಳೂರು: ಲೋಕಾಯುಕ್ತ ತಂಡಗಳು ಬುಧವಾರ (ಜೂನ್ 28) ಬೆಳಗ್ಗೆ ಕರ್ನಾಟಕದ ಹಲವೆಡೆ ದಾಳಿ ನಡೆಸಿವೆ. ಕರ್ನಾಟಕದ ವಿವಿಧೆಡೆ ಈ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಪುರ ತಹಸೀಲ್ದಾರ್ ಅಜಿತ್ ರೈ ಅವರ ನಿವಾಸದ ಮೇಲೆಯೂ ತಂಡ ದಾಳಿ ನಡೆಸಿದೆ.
ಕೊಡಗು, ಕುಶಾಲನಗರ, ಕೆಆರ್ ಪುರಂ ಬೆಂಗಳೂರು, ವಿಜಯನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ಯಾದಗಿರಿ, ಬೆಳಗಾವಿ, ರಾಮನಗರ ಮತ್ತು ಕೋಲಾರದಲ್ಲೂ ದಾಳಿ ನಡೆದಿದ್ದು ಲೋಕಾಯುಕ್ತ ತಂಡ ವಶಪಡಿಸಿಕೊಂಡ ಮೊತ್ತ ಇನ್ನೂ ಬಹಿರಂಗವಾಗಿಲ್ಲ.
ಈ ವೇಳೆ ಅಜಿತ್ ರೈಯವರ ಮನೆಯಲ್ಲಿ ದೊಡ್ಡ ಮೊತ್ತದ ಹಣ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ . ನಗರ ಘಟಕದ ಪೊಲೀಸರು ಅಜಿತ್ ಕುಮಾರ್ ರೈ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಲೋಕಾಯುಕ್ತ ಎಸ್ ಪಿ ಕೆ.ವಿ. ಅಶೋಕ್ ನೇತೃತ್ವದಲ್ಲಿ ಅಜಿತ್ ಅವರ ಮನೆ ಹಾಗೂ ಇತರ ಹತ್ತು ಸ್ಥಳಗಳ ಮೇಲೆ ಬುಧವಾರ ಬೆಳಿಗೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ.