ಹಾಸನ ನಗರದ ಹಲವೆಡೆ ವಿಲೇವಾರಿ ಆಗದ ತ್ಯಾಜ್ಯ ಎಲ್ಲಂದರಲ್ಲಿ ಬಿದ್ದಿರುವ ಕಸದ ರಾಶಿ, ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಎಪಿಎಂಸಿ, 80 ಫೀಟ್ ರೋಡ್, ತಮ್ಲಾಪುರ ರಸ್ತೆ ಸೇರಿ ಹಲವೆಡೆ ಪರಿಶೀಲನೆ, ಅಗಿಲೆ ಬಳಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿ ಎಲ್ಲೆಂದರಲ್ಲಿ ಕಸ ಇರುವುದು ನೋಡಿ ಬೇಸರ ವ್ಯಕ್ತಪಡಿಸಿದರು
“ಆರೋಗ್ಯಕರ ಸಮಾಜಕ್ಕಾಗಿ ಕಸ ವಿಲೇವಾರಿ ಎನ್ನುವುದು ಪ್ರತಿ ನಾಗರಿಕರ ಮತ್ತು ಎಲ್ಲ ಇಲಾಖೆ ನೌಕರರ ಜವಬ್ಧಾರಿಯಾಗಿದೆ. ಜತೆಗೆ ಸಾರ್ವಜನಿಕರಿಗೂ ಕೂಡ ಜಾಗೃತಿ ಅಗತ್ಯವಾಗಿದೆ” ಎಂದರು.
ಸ್ವಚ್ಛತೆ ಕಾಪಾಡದ ಕೋಳಿ ಅಂಗಡಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ನಗರಸಭೆ ಆಯುಕ್ತ ಕೆ.ಎಂ ರಮೇಶ್, ಲೋಕಾ ಡಿವೈಎಸ್ಪಿ ಸುರೇಶ್, ಆರೋಗ್ಯ ನಿರೀಕ್ಷಕರು ಉಪಸ್ಥಿತಿ, ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದಿದ್ದಕ್ಕೆ ನಗರಸಭೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಸ್ಥಳ ಪರಿಶೀಲನೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, “ಲೋಕಾಯುಕ್ತ ಇಲಾಖೆ ನಿರ್ದೇಶನದ ಅಡಿಯಲ್ಲಿ 26 ಅಂಶಗಳ ಕಾರ್ಯಕ್ರಮದಲ್ಲಿ ತ್ಯಾಜ್ಯ ಕುರಿತ ವಿಷಯವೂ ಕೂಡ ಸೇರಿದೆ. ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿಗಳು ರೌಂಡ್ಸ್ ಮಾಡಲಾಗಿದೆ. ಈ ವೇಳೆ ಹಲವಾರು ಜನರು ರಸ್ತೆ ಬದಿ ಕಸವನ್ನು ಹಾಕುವುದು ಕಂಡುಬಂದಿರುತ್ತದೆ. ಇದರಿಂದ ಮನುಷ್ಯರಿಗೆ, ಪ್ರಾಣಿಗಳಿಗೆ, ಪಕ್ಷಿಗಳಿಗೆ ಹಾನಿಕರ ಅಂಶವಾಗಿದೆ. ಕಸದ ಜೊತೆ ಪ್ಲಾಸ್ಟಿಕ್ ಎಸೆಯುವುದರಿಂದ ಫುಡ್ ಜೊತೆ ಗೋವುಗಳು ಪ್ಲಾಸ್ಟಿಕನ್ನು ಕೂಡ ಸೇವಿಸುತ್ತಿವೆ. ಇದು ಅಂತಿಮವಾಗಿ ಮನುಷ್ಯನ ಮೇಲೆ ಪರಿಣಾಮ ಬೀರುವಂತಾಗಿದೆ” ಎಂದರು.
“ಎಷ್ಟೊ ಕಸ ಮತ್ತು ವೇಸ್ಟನ್ನು ನದಿಯೊಳಗೆ, ಕೆರೆ ಪಕ್ಕ ಹಾಕುವುದರಿಂದ ನಾವು ಕುಡಿಯುವ ನೀರು ಒಳಗೆ ಸೇರುವುದರಿಂದ ಹಲವಾರು ಹಾನಿಕರ ಅಂಶಗಳು ಮನುಷ್ಯನಿಗೆ ಸೇರಿ ಆರೋಗ್ಯ ಹಾಳಾಗುತ್ತಿದೆ. ಸಿಟಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಈ ಬಗ್ಗೆ ಆರೋಗ್ಯಾಧಿಕಾರಿಗಳ ಬಳಿ ಮಾತನಾಡಲಾಗಿದೆ. ಕಸ ವಿಲೇವಾರಿ ಎನ್ನುವುದು ಪ್ರತಿ ನಾಗರಿರ, ಎಲ್ಲ ಇಲಾಖೆ ನೌಕರರ ಜವಬ್ಧಾರಿ. ಸಾರ್ವಜನಿಕರಿಗೂ ಕೂಡ ಎಲ್ಲಿ ಕಸ ಹಾಕಬೇಕು ಎಂಬುದರ ಬಗ್ಗೆ ಜಾಗೃತಿ ಅಗತ್ಯ. ಕಸದ ಆಪೆ ವಾಹನದಲ್ಲೆ ಕಸ ಹಾಕುವಂತೆ ಮನವಿ ಮಾಡಿದರು. ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೂ ನಗರ ಸ್ವಚ್ಛತೆ ಬಗ್ಗೆ ಹೇಳಿದ್ದು, ಅವರಿಗೆ ನಾವು ಕೈಜೋಡಿಸೋಣ” ಎಂದು ಕರೆ ನೀಡಿದರು.