Home ದೇಶ ಮಹಾರಾಷ್ಟ್ರ: ಶರದ್ ಪವಾರ್‌ ಗುಂಪಿಗೆ ಇಬ್ಬರು ಶಾಸಕರು ವಾಪಸ್‌

ಮಹಾರಾಷ್ಟ್ರ: ಶರದ್ ಪವಾರ್‌ ಗುಂಪಿಗೆ ಇಬ್ಬರು ಶಾಸಕರು ವಾಪಸ್‌

0

ಮುಂಬೈ: ಏಕನಾಥ್ ಶಿಂಧೆ- ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಇಬ್ಬರು ಶಾಸಕರು – ಸತಾರಾ ಶಾಸಕ ಮಕ್ರಂದ್ ಪಾಟೀಲ್ ಮತ್ತು ಉತ್ತರ ಕರಡ್ ಶಾಸಕ ಬಾಳಾಸಾಹೇಬ್ ಪಾಟೀಲ್ – ಶರದ್ ಪವಾರ್ ಅವರ ಪಾಳಯಕ್ಕೆ ಮರಳಿದ್ದಾರೆ. ಪಕ್ಷದ ಎರಡೂ ಬಣಗಳು ಪರಸ್ಪರ ತಂತ್ರಗಳನ್ನು ರೂಪಿಸುತ್ತಿದ್ದು ಒಂದು ಬಣ ಇನ್ನೊಂದು ಬಣದ ನಾಯಕರ ಮೇಲೆ ಕ್ರಮ ಕೈಗೊಳ್ಳುತ್ತಿದೆ.

ಶಿರೋಲ್‌ ಲೋಕಸಭಾ ಕ್ಷೇತ್ರದ ಸಂಸದ ಅಮೋಲ್‌ ಕೋಲ್ಹೆ ಕೂಡಾ ಪವಾರ್‌ ಗುಂಪಿಗೆ ಮರಳುವುದಾಗಿ ರಾಜಭವನದಲ್ಲಿ ತಿಳಿಸಿದರು.

ತನ್ನ ಅಳಿಯನ ಗುಂಪಿನ ವಿರುದ್ಧದ ತನ್ನ ಮೊದಲ ವಾಗ್ದಾಳಿಯಲ್ಲಿ, ಪವಾರ್ ಹಿರಿಯ ಸಂಸದರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟ್ಕರೆ ಅವರನ್ನು ಪಕ್ಷದಿಂದ ವಜಾಗೊಳಿಸಿದ್ದರು.

ಇದಕ್ಕೆ ಪ್ರತಿಯಾಗಿ ಅಜಿತ್ ಅವರ ಗುಂಪು ಜಯಂತ್ ಪಾಟೀಲ್ ಅವರನ್ನು ಎನ್‌ಸಿಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿತ್ತು

ತಟ್ಕರೆ ಅವರ ಪುತ್ರಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದರು.

ಶರದ್ ಪವಾರ್ ಗುಂಪು ಅಜಿತ್ ಮತ್ತು ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಇತರ ಎಂಟು ಎನ್‌ಸಿಪಿ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ವಿಧಾನಸಭಾ ಸ್ಪೀಕರ್‌ಗೆ ಎರಡು ಅರ್ಜಿಗಳನ್ನು ಸಲ್ಲಿಸಿದೆ. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷದ ನಾಯಕರಾಗಿ ನೇಮಕಗೊಂಡ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾದ್ ಅವರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಅಜಿತ್ ನೇತೃತ್ವದ ಕೂಟವು ಸ್ಪೀಕರ್‌ ಅವರಲ್ಲಿ ಮನವಿ ಮಾಡಿದೆ.

ಒಟ್ಟಿನಲ್ಲಿ ಎನ್‌ಸಿಪಿಯೊಳಗಿನ ಬಣ ರಾಜಕೀಯ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸತೊಡಗಿದೆ.

You cannot copy content of this page

Exit mobile version