ಬೆಂಗಳೂರು: ನಗರದಲ್ಲಿ ಭಾನುವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ನೀರಿನಿಂದ ಆವೃತವಾಗಿ ಸಂಪರ್ಕ ಕಡಿತಗೊಂಡಿದ್ದು, ಜನರು ಗೋಳಾಡುವಂತಾಗಿದೆ. ಹಾಗಾಗಿ ಈ ನಿರ್ಲಕ್ಷ್ಯ ಸರ್ಕಾರದಿಂದ ಹಾಗೂ ಮಳೆಯಿಂದ ಜನರನ್ನು ಕಾಪಾಡಿ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ್ ಹಾರಿಸ್ ನಲಪಾಡ್, ಬೆಂಗಳೂರಿನ ಜಲಾವೃತ ರಸ್ತೆಯ ಮೇಲೆ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಬಳಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.