ಛತ್ತೀಸ್ಗಢದ ದಾಂತೇವಾಡ-ಬಿಜಾಪುರ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭಾರೀ ಎನ್ಕೌಂಟರ್ ನಡೆದಿದೆ. ಈ ಎನ್ಕೌಂಟರ್ನಲ್ಲಿ 9 ಮಾವೋವಾದಿಗಳು ಹತರಾಗಿದ್ದರು.
ದಾಂತೇವಾಡ ಜಿಲ್ಲೆಯ ಲೋಹಗಾಂವ್ ಮತ್ತು ವುರಂಜೆಲ್ ಅರಣ್ಯದಲ್ಲಿ 40 ಮಾವೋವಾದಿಗಳು ಇರುವ ಬಗ್ಗೆ ಮಾಹಿತಿ ಪಡೆದ ನಂತರ, ಸಿಆರ್ಪಿಎಫ್ ಮತ್ತು ಡಿಆರ್ಜಿ ಪಡೆಗಳ ಯೋಧರು ಕೂಂಬಿಂಗ್ ನಡೆಸಿದರು.
ಬಳಿಕ ಎರಡು ಗುಂಪುಗಳ ನಡುವೆ ಸುಮಾರು ಮೂರು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು. ನಂತರ, ಪಡೆಗಳು ಘಟನಾ ಸ್ಥಳವನ್ನು ಪರಿಶೀಲಿಸಿದಾಗ, ಆರು ಮಹಿಳೆಯರು ಸೇರಿದಂತೆ ಒಂಬತ್ತು ಮಾವೋವಾದಿಗಳು ಸತ್ತಿರುವುದು ಕಂಡುಬಂದಿದೆ. ಈ ಎನ್ಕೌಂಟರ್ನಲ್ಲಿ ಮಾವೋವಾದಿ ನಾಯಕ ಜಗನ್ ಹತರಾಗಿದ್ದಾರೆ ಎಂದು ಛತ್ತೀಸ್ಗಢ ಸರ್ಕಾರ ಖಚಿತಪಡಿಸಿದೆ.
ಕೇಂದ್ರ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಮಾಚರ್ಲ ಎಸೋಬು ಅಲಿಯಾಸ್ ಜಗನ್ ಅಲಿಯಾಸ್ ರಾಂದೇವ್ ದಾದಾನನ್ನು ಹಿಡಿದುಕೊಟ್ಟವರಿಗೆ ಸುಮಾರು 25 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಮಾವೋವಾದಿಗಳ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಜಗನ್ ತನ್ನ ಹೆಸರಿನಲ್ಲಿ ಎಲ್ಲಾ ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡುತ್ತಿದ್ದರು. ಅವರ ಹುಟ್ಟೂರು ಹನುಮಕೊಂಡ ಜಿಲ್ಲೆಯ ಕಾಜಿಪೇಟ್ ಮಂಡಲದ ಟೇಕುಲಗುಡೆಂ. ಜಗನ್ 1980ರಲ್ಲಿ ಮಾವೋವಾದಿ ಚಳುವಳಿಗೆ ಸೇರಿಕೊಂಡು ಮುಂದೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರು.