RSS ಮುಖ್ಯಸ್ಥ ಮೋಹನ್ ಭಾಗವತ್ ಮಾಂಸಾಹಾರ ಮತ್ತು ಮಾಂಸಾಹಾರಿಗಳ ಬಗ್ಗೆ ಮತ್ತೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಮಾಂಸ ತಿನ್ನುವವರು ತಪ್ಪು ದಾರಿ ತುಳಿಯುತ್ತಾರೆ ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
RSS ನ ಸಹವರ್ತಿ ಸಂಘಟನೆಯಾದ ಭಾರತ್ ವಿಕಾಸ್ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಅವರು ವ್ಯಕ್ತಿತ್ವದ ಸರ್ವಾಂಗೀಣ ವಿಕಸನ ವಿಚಾರದ ಬಗ್ಗೆ ಮಾತನಾಡುತ್ತಾ ಮಾಂಸಾಹಾರವನ್ನು ಉಲ್ಲೇಖಿಸಿ ಮಾತನಾಡಿದರು.
‘ಮಾಂಸಾಹಾರ ಒಂದು ತಪ್ಪು ರೀತಿಯ ಆಹಾರ ಪದ್ಧತಿಯಾಗಿದ್ದು ಹಿಂಸೆಗೆ ದಾರಿ ಮಾಡಿಕೊಡುವ ಆಹಾರವನ್ನು ನಾವು ಪ್ರೋತ್ಸಾಹಿಸಬಾರದು. ತಪ್ಪು ರೀತಿಯ ಆಹಾರ ಪದ್ಧತಿ ಹಾಗೂ ಕೆಟ್ಟ ಆಹಾರವನ್ನು ಸೇವಿಸಿದರೆ ಮಾನಸಿಕವಾಗಿಯೂ ಅದು ನಮ್ಮನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ. ಮಾಂಸಾಹಾರ ಹಿಂಸೆಯನ್ನು ಉತ್ತೇಜಿಸುವ ಆಹಾರ ಪದ್ಧತಿ. ಹಾಗಾಗಿ ನಾವು ಮಾಂಸಾಹಾರದಿಂದ ದೂರವೇ ಇರಬೇಕು’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೋಹನ್ ಭಾಗವತ್ ಪಾಶ್ಚಿಮಾತ್ಯರ ಆಹಾರ ಪದ್ಧತಿಯನ್ನು ಉಲ್ಲೇಖಿಸಿ ಮಾತನಾಡಿ ‘ಪಾಶ್ಚಿಮಾತ್ಯರಿಗೂ ಭಾರತೀಯರಿಗೂ ವ್ಯತ್ಯಾಸವಿದೆ, ಭಾರತದ ಮಾಂಸಾಹಾರಿಗಳು ಸಂಯಮದಿಂದ ಕೆಲವು ನಿಯಮಗಳನ್ನು ಅನುಸರಿಸಿ ಆಹಾರ ಸೇವನೆ ಮಾಡುತ್ತಾರೆ. ಹಾಗಾಗಿ ಆಹಾರ ಸೇವಿಸುವುದರಲ್ಲೂ ನಾವು ನಿಯಮ ಪಾಲಿಸಬೇಕು’ ಎಂದು ಹೇಳಿದರು.
ಮುಂದುವರಿದು ‘ಇಲ್ಲಿ ಮಾಂಸಾಹಾರ ಸೇವಿಸುವ ಜನರು ಇಡೀ ಶ್ರಾವಣ ಮಾಸದಲ್ಲಿ ತಿನ್ನುವುದಿಲ್ಲ. ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಹ ಅವರು ತಿನ್ನುವುದಿಲ್ಲ. ಹಬ್ಬ ಹರಿದಿನಗಳಲ್ಲಿ ತಿನ್ನುವುದಿಲ್ಲ, ಮೇಲಾಗಿ ಹಿಂದೂ ದೇವರುಗಳು ಸಹ ಮಾಂಸಾಹಾರ ಬಯಸುವುದಿಲ್ಲವಾದ್ದರಿಂದ ಮಾಂಸಾಹಾರ ಎಂಬುದೇ ಒಂದು ತಪ್ಪು ಆಹಾರ ಪದ್ಧತಿ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
🔸ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನೂ ನೋಡಿ: ವಾಹನಗಳೇ ಹೋಗದ ಜಾಗದಲ್ಲಿ ಕಾಂತಾರ ಸಿನಿಮಾ ಚಿತ್ರಿಕರಣ ಮಾಡಿದ್ದಾರೆ: ಪ್ರಗತಿ ಶೆಟ್ಟಿ
Reviews KANTARA After Watching Celebrity Show