Home ವಿಶೇಷ ಬಿಲ್ಕಿಸ್ ಬಾನು ತೀರ್ಪು : ನ್ಯಾಯಾಂಗದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಿದೆ

ಬಿಲ್ಕಿಸ್ ಬಾನು ತೀರ್ಪು : ನ್ಯಾಯಾಂಗದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಿದೆ

0

2002ರ ಗುಜರಾತ್ ಹತ್ಯಾಕಾಂಡದಲ್ಲಿ ಬಿಲ್ಕಿಸ್ ಬಾನು ಕುಟುಂಬದ ಸದಸ್ಯರ ಹತ್ಯೆಗೆ ಕಾರಣರಾದ ಪುರುಷರ ಅಕಾಲಿಕ ಬಿಡುಗಡೆಗೆ ಗುಜರಾತ್ ಸರ್ಕಾರ ಅನುಕೂಲ ಮಾಡಿಕೊಟ್ಟಿತ್ತು. ಈ ಬಗ್ಗೆ ಗುಜರಾತ್ ನ ಭಾರತೀಯ ಜನತಾ ಪಕ್ಷದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ತನಿಖೆಯನ್ನು ಗುಜರಾತ್ ಪೋಲೀಸರಿಂದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಗೆ ವರ್ಗಾಯಿಸಲಾಗಿತ್ತು. ಇದರ ವಿಚಾರಣೆಯನ್ನು ಮುಂಬೈ ಗೆ ವರ್ಗಾಯಿಸಿದ ನಂತರ ಮುಂಬೈ ಸೆಷನ್ಸ್ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಪರಾಧಿಗಳನ್ನು ಬಿಡುಗಡೆಗೊಳಿಸಿ ಅವರೊಂದಿಗೆ ವೇದಿಕೆ ಹಂಚಿಕೊಂಡು,ಅಪರಾಧಿಗಳಿಗೆ ಹಾರ ಹಾಕಿ ಸನ್ಮಾನಿಸಿದ್ದ ಅವಮಾನಕರ ಘಟನೆಗೆ, ಇದೀಗ ನ್ಯಾಯಾಲಯವು ಅವರನ್ನು ಎರಡು ವಾರಗಳಲ್ಲಿ ಜೈಲಿಗೆ ಮರಳುವಂತೆ ನಿರ್ದೇಶಿಸಿರುವುದರೊಂದಿಗೆ ಕೊನೆಗೊಂಡಿದೆ.

ಮಹಾರಾಷ್ಟ್ರದಲ್ಲಿ ಶಿಕ್ಷೆಗೆ ಒಳಗಾದ ಅಪರಾಧಿಗಳಿಗೆ ವಿನಾಯಿತಿ ನೀಡಲು ಗುಜರಾತ್ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅಪರಾಧಿಗಳಿಗೆ ಅಗ್ಗಾಗ್ಗೆ ಪೆರೋಲ್ ಗಳನ್ನು ನೀಡಬಾರದು, ಎರಡು ವಾರಗಳಲ್ಲಿ ಅಪರಾಧಿಗಳು ಹಾಜರಾಗಬೇಕು, ವಿಫಲವಾದರೆ ಗುಜರಾತ್ ಪೋಲಿಸರು ಅವರನ್ನು ಹುಡುಕಬೇಕಾಗುತ್ತದೆ ಎಂದು ನೀಡಿರುವ ತೀರ್ಪು ನ್ಯಾಯಾಂಗದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಿದೆ.

ಪ್ರಬಲ ರಾಜಕೀಯದ ವಿರುದ್ಧ ಒಂಟಿ ಮಹಿಳೆ ಕಣಕ್ಕಿಳಿದು ಹೋರಾಟ ಮಾಡುವುದು ಸುಲಭದ ಮಾತಲ್ಲ. ಈ ಯುದ್ಧದಲ್ಲಿ ಬಿಲ್ಕಿಸ್ ಬಾನುಗೆ ತಡವಾಗಿಯಾದರೂ ನ್ಯಾಯ ದೊರಕಿದೆ.

“ಯುದ್ದವು ಕಠಿಣವಾಗಿತ್ತು ಆದರೆ ಬಿಲ್ಕಿಸ್ ಬಾನು ಛಲ ಬಿಡದೇ ಶಕ್ತಿಯ ಸ್ತಂಭದಂತೆ ಹೋರಾಡಿದರು” ಎಂದು ಬಿಲ್ಕಿಸ್ ಬಾನು ಅವರ ವಕೀಲರಾದ ಶೋಭಾ ಗುಪ್ತಾ ಮಾದ್ಯಮಗಳಿಗೆ ಹೇಳಿಕೆ ನೀಡಿದರು.

ಹನ್ನೊಂದು ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ ಆರಂಭಿಕ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಒಂದು ಗಂಟೆಯ ನಂತರ ಬಿಲ್ಕಿಸ್ ಭಾನುರವರು ಮತ್ತೆ ನಾನು ಉಸಿರಾಡುವಂತೆ ಅನಿಸುತ್ತಿದೆ. ನ್ಯಾಯವೆಂದರೆ ಇದು, ನಾನು ಸಮಾಧಾನದಿಂದ ಕಣ್ಣೀರು ಹಾಕಿದೆ, ಒಂದೂವರೆ ವರ್ಷಗಳಲ್ಲಿ ಇಂದು ಮೊದಲ ಬಾರಿ ಮುಗುಳ್ನಕ್ಕು, ಮಕ್ಕಳನ್ನು ತಬ್ಬಿಕೊಂಡೆ, ಇಂದು ನ್ಯಾಯಲಯದ ಮೇಲೆ ಭರವಸೆ ಮೂಡಿತು ಎಂದು ತಮ್ಮ ಅನಿಸಿಕೆ ಹಂಚಿಕೊಂಡಿರುವುದು ಮನಕಲಕುತ್ತದೆ.

ಮಮತಾ ಆರ್
ವಿಮರ್ಶಕರು

You cannot copy content of this page

Exit mobile version