Home ಬೆಂಗಳೂರು ಬೆಂಗಳೂರಿನಲ್ಲಿ ಚಿಗುರಿ ನಿಂತ ಪುಡಿರೌಡಿಗಳು: ಬೈಂದೂರು ಮೂಲದ ಅಂಗಡಿ ಹುಡುಗರ ಮೇಲೆ ಹಲ್ಲೆ

ಬೆಂಗಳೂರಿನಲ್ಲಿ ಚಿಗುರಿ ನಿಂತ ಪುಡಿರೌಡಿಗಳು: ಬೈಂದೂರು ಮೂಲದ ಅಂಗಡಿ ಹುಡುಗರ ಮೇಲೆ ಹಲ್ಲೆ

0

ಬೆಂಗಳೂರು: ನಗರದಲ್ಲಿ ಚಿಲ್ಲರೆ ಹಾವಳಿ ಮಿತಿ ಮೀರಿದ್ದು, ಇವರ ದಾಂಧಲೆಗೆ ಕೊನೆಯಿಲ್ಲದಂತಾಗಿ ಸಣ್ಣ ವ್ಯಾಪಾರಿಗಳು ವಾಪಾರ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇತ್ತೀಚಿನ ಘಟನೆಯೊಂದರಲ್ಲಿ ಸಣ್ಣ ಕಾಂಡಿಮೆಂಟ್ಸ್‌ ನಡೆಸಿಕೊಂಡು ಬರುತ್ತಿದ್ದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿಗೆ ಸೇರಿದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ.

ನಿನ್ನೆ ರಾತ್ರಿ ನಾಲ್ಕು ಮಂದಿ ಪುಡಿ ರೌಡಿಗಳ ಗುಂಪು ಗುಂಪು ಕುಂದಲಹಳ್ಳಿ ಗೇಟ್ ಬಳಿಯಿರುವ ಬ್ರಹ್ಮಲಿಂಗೇಶ್ವರ ಬೇಕರಿಗೆ ಸಿಗರೇಟ್ ಸೇದಲು ಬಂದು ಸಿಗರೇಟಿನ ಹಣ ಕೇಳಿದ ಅಂಗಡಿಯ ಯುವಕರ ಮೇಲೆ ಹಿಗ್ಗಾಮುಗ್ಗಾ ದಾಳಿ ನಡೆಸಿದ್ದಾರೆ. ಕೆಟ್ಟಾ ಕೊಳಕು ಭಾಷೆಯಲ್ಲಿ ಬಯ್ಯುತ್ತಾ ಆ ಯುವಕರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ನೋಡಿದರೆ ಎಂತವರಿಗೂ ಮನಸ್ಸು ಕರಗುತ್ತದೆ. ಪ್ರಸ್ತುತ ಹಲ್ಲೆಗೊಳಗಾದ ಯುವಕರು ಹೆಚ್​ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಗೆ ಪ್ರತಿಕ್ರಿಯಿಸಿರುವ ಕನ್ನಡ ಹೋರಾಟಗಾರ ಪೋಲಿಸರು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಮಾತಾನಾಡುತ್ತಾ, “ಹೀಗೆ ದುಡಿದು ತಿನ್ನಲು ಬಂದ ಯುವಕರ ಮೇಲೆ ಹಲ್ಲೆ ನಡೆಸುವುದು ಅಮಾನವೀಯ, ನನಗೆ ಆ ವಿಡಿಯೋವನ್ನು ಅರ್ಧ ಕೂಡಾ ನೋಡಾಗದೆ ಆಫ್‌ ಮಾಡಿಬಿಟ್ಟೆ. ಅದನ್ನು ಮನುಷ್ಯರಾದವರು ನೋಡಲು ಸಾಧ್ಯವಿಲ್ಲ,” ಎಂದಿದ್ದಾರೆ.
ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿಯವರು ಘಟನೆಯ ಕುರಿತು ವಿವರ ತರಿಸಿಕೊಂಡಿದ್ದು ಸಂಬಂಧಪಟ್ವವರೊಡನೆ ಕ್ರಮ ಕೈಗೊಳ್ಳುವಂತೆ ಮಾತನಾಡುವುದಾಗಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಅಪರಿಚಿತ ಏಳೆಂಟು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 506, 504, 427, 395, 448 ಅಡಿ ಪ್ರಕರಣ ದಾಖಲಾಗಿದೆ.

You cannot copy content of this page

Exit mobile version