ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಕೊನೆಗೂ ತನ್ನ ಟ್ವಿಟರ್ ಡಿಪಿಯಲ್ಲಿ ಕೇಸರಿ ಧ್ವಜವನ್ನು ತೆಗೆದು ತ್ರಿರ್ವಣ ಧ್ವಜವನ್ನು ಬದಲಾಯಿಸಿದೆ.
ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ ೨ ರಿಂದ ೧೫ ರವರೆಗೆ ಪ್ರತಿಯೊಬ್ಬರ ಸೋಶಿಯಲ್ ಮೀಡಿಯಾ ಪ್ರೊಫೈಲ್ಗಳಲ್ಲಿ ತ್ರಿವರ್ಣ ಧ್ವಜವನ್ನು ಹಾಕುವಂತೆ ಕರೆ ನೀಡಿದ್ದರು. ಪ್ರಧಾನಿ ಕರೆಯ ನಂತರವು ಆರ್ಎಸ್ಎಸ್ ತನ್ನ ಡಿಪಿಯನ್ನು ಬದಲಿಸಿರಲಿಲ್ಲ. ಇದಕ್ಕೆ ತೀವ್ರ ವಿರೊಧ ವ್ಯಕ್ತವಾಗಿತ್ತು.
ಕೊನೆಗೂ ಆರ್ಎಸ್ಎಸ್ ತನ್ನ ಡಿಪಿಯಲ್ಲಿ ಕೇಸರಿ ಧ್ವಜವನ್ನು ತೆಗೆದು ತ್ರಿವರ್ಣ ಧ್ವಜವನ್ನು ಹಾಕಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.