Home ಬೆಂಗಳೂರು ಪುನೀತ್‌ ಕೆರೆಹಳ್ಳಿಗೆ ಸನ್ಮಾನಿಸಿದ ಬೆನ್ನಲ್ಲೇ ನಿವೃತ್ತ ನ್ಯಾ.ಸಂತೋಷ್​ ಹೆಗ್ಡೆ ಬೇಸರ

ಪುನೀತ್‌ ಕೆರೆಹಳ್ಳಿಗೆ ಸನ್ಮಾನಿಸಿದ ಬೆನ್ನಲ್ಲೇ ನಿವೃತ್ತ ನ್ಯಾ.ಸಂತೋಷ್​ ಹೆಗ್ಡೆ ಬೇಸರ

0

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ (Social Media) ನಿನ್ನೆಯಿಂದ ಫೋಟೋವೊಂದು (Photo) ಭಾರೀ ವೈರಲ್‌ ಆಗುತ್ತಿದೆ. ಈ ಪೋಟೋ ನಿವೃತ್ತ ನ್ಯಾ.ಸಂತೋಷ್​ ಹೆಗ್ಡೆ (N Santosh Hegde) ಅವರು ಹಿಂದೂ (Hindu) ಸಂಘಟನೆಯ ಕಾರ್ಯಕರ್ತ ಪುನೀತ್​​ ಕೆರೆಹಳ್ಳಿಗೆ (Puneeth Kerehalli) ಸನ್ಮಾನ ಮಾಡಿರುವುದು ಆಗಿದೆ.ಇಲ್ಲಿ ಸಂತೋಷ್​ ಹೆಗ್ಡೆ ಅವರ ನಡೆಗೆ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಅಪರಾಧಿ ಹಿನ್ನೆಲೆಯುಳ್ಳ ವ್ಯಕ್ತಿಗೆ ಸನ್ಮಾನ ಮಾಡಿದ್ದಾರೆ. ನ್ಯಾ. ಸಂತೋಷ್​ ಹೆಗ್ಡೆ ಅವರಿಗೆ ಪುನೀತ್​​ ಕೆರೆಹಳ್ಳಿಯ ಹಿನ್ನೆಲೆ ಏನು ಅಂತಾ ಗೊತ್ತಿರಲಿಲ್ವಾ ಎಂದು ಪ್ರಶ್ನಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ.


ನಿವೃತ್ತ ನ್ಯಾ. ಸಂತೋಷ್​ ಹೆಗ್ಡೆ ಹೇಳಿದ್ದೇನು..?: ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವಿವಾದವಾಗುತ್ತಿದ್ದಂತೆಯೇ ಸಂತೋಷ್​ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ. ಯಾರಿಗೆ ಪ್ರಶಸ್ತಿ ಎಂದು ತಿಳಿಸಿರಲಿಲ್ಲ, ಅರ್ಥಪೂರ್ಣ ಕಾರ್ಯಕ್ರಮ ಎಂದು ತಿಳಿದು ನಾನು ಹೋಗಿದ್ದೆ. ನಾನೊಬ್ಬನೇ ಪ್ರಶಸ್ತಿಯನ್ನ ಕೊಟ್ಟಿಲ್ಲ, ಕಾರ್ಯಕ್ರಮದಲ್ಲಿ ಇನ್ನೊಬ್ಬರು ಮುಖ್ಯ ನ್ಯಾಯಾಮೂರ್ತಿಗಳಿದ್ದರು. ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಮುಂದೆ ಯಾವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಿಗೂ ನಾನು ಹೋಗುವುದಿಲ್ಲ ಎಂದಿದ್ದಾರೆ.

You cannot copy content of this page

Exit mobile version