ಹಾಸನ: ನಮ್ಮ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಮಕ್ಕಳು ಛಳಿ, ಬಿಸಿಲು ಹಾಗೂ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ, ಶ್ರವಣಬೆಳಗೊಳದ ಜಾತ್ರೆಯಲ್ಲಿ ಸೇರಿದಂತೆ ವಿವಿಧ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಂಡು ಜನರಲ್ಲಿಯೇ ದೇವರು ಕಂಡಿದ್ದಾರೆ ಎಂದು ಸ್ಕೌಟ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ ಶ್ಲಾಘಿಸಿದರು.
ನಗರದ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಭವನದ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ್ ಸ್ಕೌಟ್ ಅಂಡ್ ಗೈಡ್ಸ್ 75 ವರ್ಷಗಳು ಭಾರತದ ಇತಿಹಾಸದಲ್ಲಿ ಏಳುವರೆ ಲಕ್ಷ ರೀಚ್ ಆಗಿರುವುದು ಇದೆ ಮೊದಲ ಬಾರಿಗೆ. ಇದರ ಕ್ರಡಿಟ್ ಹಾಸನ ಜಿಲ್ಲೆಯ ಸಂಸ್ಥೆಯವರಿಗೆ ಸಲ್ಲಬೇಕು. ಹಾಸನ ಜಿಲ್ಲೆಗೆ ಟಾಗೇಟ್ ಗಣತಿ ನೀಡಿದ್ದೇವು ಅದರಲ್ಲಿ ನೂರಕ್ಕೆ ನೂರರಷ್ಟು ರೀಚ್ ಮಾಡಿದ್ದಾರೆ. ಪ್ರತಿ ವರ್ಷ ನಡೆಯುವ ಹಾಸನಾಂಬೆ ಜಾತ್ರೆಯಲ್ಲಿ ನಮ್ಮ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ನೂರಾರು ಜನ ಮಕ್ಕಳು ಆ ಸಂದರ್ಭದಲ್ಲಿ ಛಳಿ, ಬಿಸಿಲು ಲೆಕ್ಕಿಸದೇ ಸೇವೆ ಮಾಡಿ ಜನರಲ್ಲಿ ದೇವರನ್ನು ಕಾಣುತ್ತಾರೆ ಎಂದರು. ಇನ್ನು ಹಾಸನಾಂಬೆ ದೇವಾಲಯದ ಬಾಗಿಲು ಹಾಕಿದ ಮೇಲೆ ಕಾಣೀಕೆ ಹುಂಡಿಯ ಹಣ ಏಣಿಕೆ ಮಾಡಲು ಕೂಡ ಮಕ್ಕಳು ಮುಂದಾಗುತ್ತಾರೆ. ಈ ವರ್ಷ 13 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ.
ಸರಕಾರದ ಅನೇಕ ಇಲಾಖೆಗಳಿವೆ. ಆದರೇ ಪ್ರಾಮಾಣಿಕರು ಎಂದು ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಮಕ್ಕಳಿಗೆ ಹುಂಡಿ ಏಣಿಕೆ ಮಾಡಲು ಕೊಡುತ್ತಾರೆ. ನಿಮ್ಮ ಸೇವೆಯ ಒಂದು ಭಾಗ ಇದಾಗಿದೆ ಎಂದು ಶ್ಲಾಘಿಸಿದರು. ಸುಮಾರು ಆರು ವರ್ಷಗಳ ಹಿಂದೆ ಶ್ರವಣಬೆಳಗೊಳದಲ್ಲಿ ಜೈನರ ದೊಡ್ಡ ಜಾತ್ರೆ ನಡೆದಿತ್ತು. ಸುಮಾರು 4 ಸಾವಿರಕ್ಕೂ ಹೆಚ್ಚು ರೋರ್ಸ್ ರೇರ್ಸ್ ನಮ್ಮ ಮಕ್ಕಳು ಬಂದು ಒಂದು ತಿಂಗಳ ಕಾಲ ಬಿಸಿಲಿನಲ್ಲಿ ಜನರ ಸೇವೆ ಮಾಡಿದ್ದಾರೆ. ಇದೆ ತರಹ ವಿವಿಧ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಂಡು ತಮ್ಮದೆಯಾದ ಸೇವೆಯನ್ನು ಸಮಾಜಕ್ಕೆ ಕೊಡುತ್ತಿದ್ದಾರೆ ಎಂದು ಹೇಳಿದರು. ನಮ್ಮ ಜಿಲ್ಲೆಯಲ್ಲಿ ವಿವಿಧ ಐತಿಹಾಸಿಕ ಸ್ಥಳಗಳಿವೆ ಜಾಗಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಮಕ್ಕಳು ವೀಕ್ಷಣೆ ಮತ್ತು ಪರಿಚಯ ಮಾಡಿಕೊಳ್ಳುವ ಶಿಬಿರವನ್ನು ಮಾರ್ಚ್ 22 ರಿಂದ ಮಾರ್ಚ್ 24ರ ವರೆಗೂ ಹಾಸನ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯ ಮತ್ತು ವೀಕ್ಷಣಾ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಸರ್ಟಿಫಿಕೆಟನ್ನು ಸ್ಕೌಟ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರು ವಿತರಿಸಿದರು. ಪ್ರವಾಸದ ಅನುಭವನು ಮಕ್ಕಳು ಇದೆ ವೇಳೆ ಹಂಚಿಕೊAಡರು. ಇದೆ ವೇಳೆ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೂರು ದಿವಸದ ಶಿಬಿರದ ಬಗ್ಗೆ ಮಾಹಿತಿ ನೀಡಿದರು.ಇದೆ ಸಂಧರ್ಭದಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ವೈ.ಎಸ್. ವೀರಭದ್ರಪ್ಪ, ಜಿಲ್ಲಾ ಆಯುಕ್ತರು ಸ್ಟೀಪನ್ ಪ್ರಕಾಶ್, ಆಯುಕ್ತರು ಜಯರಮೇಶ್, ಹಿರಿಯರಾದ ಕಾಂಚಾನ ಮಾಲಾ, ಜಿಲ್ಲಾ ಖಜಾಂಚಿ ರಮೇಶ್, ಜಂಠಿ ಕಾರ್ಯದರ್ಶಿ ಸೌಮ್ಯ, ರೇಂಜರ್ ವಿದ್ಯಾ, ಆಯುಕ್ತರು ಪ್ರೇಮ ಪ್ರಕಾಶ್, ರಾಜ್ಯ ಸಂಘಟನೆಯ ಪ್ರಿಯಾಂಕ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರೋವರ್ಸ್ ಗಿರೀಶ್ ಇತರರು ಉಪಸ್ಥಿತರಿದ್ದರು.