Home ಬೆಂಗಳೂರು ಬೆಂಗಳೂರು ಕಲ್ಲು ಕ್ವಾರಿ ಕುಸಿದು ಏಳು ಮಂದಿ ಕೂಲಿ ಕಾರ್ಮಿಕರ ದುರ್ಮರ*ಣ

ಬೆಂಗಳೂರು ಕಲ್ಲು ಕ್ವಾರಿ ಕುಸಿದು ಏಳು ಮಂದಿ ಕೂಲಿ ಕಾರ್ಮಿಕರ ದುರ್ಮರ*ಣ

ಬೆಂಗಳೂರು : ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಏಳು ಮಂದಿ ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣದಲ್ಲಿ ನಡೆದಿದೆ. ಕಾವೇರಿ ಜಲ್ಲಿ ಕ್ರಷರ್‌ ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತರನ್ನು ಹೊರತೆಗೆಯುವ ಕಾರ್ಯ ಆರಂಭವಾಗಿದೆ.ತಾವರೆಕೆರೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಮೃತರೆಲ್ಲರೂ ಸಹ ದಿನಗೂಲಿ ಕಾರ್ಮಿಕರಾಗಿದ್ದು, ಕ್ರಷರ್‌ ಬಳಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ. ಗುರುವಾರ ಎಂದಿನಂತೆ ಕೆಲಸದಲ್ಲಿ ತೊಡಗಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಆತಂಕವೂ ಎದುರಾಗಿದೆ. ಗಾಯಾಳುಗಳನ್ನು ಆರ್‌ಆರ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬೆಳಗ್ಗೆ 7.30 ರ ಸುಮಾರಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ, ಇಟಾಚಿ ಮೇಲಿನಿಂದ ಹಠಾತ್ತಾಗಿ ಬಂಡೆ ಕುಸಿದು ಬಿದ್ದಿತ್ತು. ಬಂಡೆಯ ಕೆಳಗೆ ಇನ್ನಷ್ಟು ಕಾರ್ಮಿಕರು ಹುಗಿದುಹೋಗಿರುವ ಆತಂಕವೂ ಸಹ ವ್ಯಕ್ತವಾಗಿದೆ.ಈ ಕ್ರಷರ್‌ ಆನಂದ ಸ್ವಾಮಿ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದ್ದು, ಪೊಲೀಸರು ಮಾಲಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ನಿರೀಕ್ಷೆಯಿದೆ.

You cannot copy content of this page

Exit mobile version