ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳ ಅಧಿಸೂಚನೆಯನ್ನು ಇಂದು ಬಿಡುಗಡೆ ಮಾಡಬಹುದು. ಇಂದು ಸಂಜೆಯೊಳಗೆ ಸಿಎಎ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಬಹುದು ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳ ಅಧಿಸೂಚನೆ ಹೊರಡಿಸುವುದು ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವಾಗಲಿದೆ.
ಸಿಎಎ ಡಿಸೆಂಬರ್ 2019ರಲ್ಲಿ ಅಂಗೀಕರಿಸಲ್ಪಟ್ಟಿತು ಮತ್ತು ನಂತರ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಿತು ಆದರೆ ದೇಶದ ಹಲವು ಭಾಗಗಳಲ್ಲಿ ಅದರ ವಿರುದ್ಧ ಪ್ರತಿಭಟನೆಗಳು ನಡೆದವು. ಈ ಕಾನೂನನ್ನು ಇನ್ನೂ ಜಾರಿಗೆ ತರಲಾಗಿಲ್ಲ, ಇದರ ಅನುಷ್ಠಾನದ ನಿಯಮಗಳನ್ನು ಇನ್ನೂ ತಿಳಿಸಬೇಕಾಗಿದೆ.
ಇತ್ತೀಚೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಅನುಷ್ಠಾನವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಏಕೆಂದರೆ ಇದು ದೇಶದ ಕಾನೂನು. ಅದೇ ಸಮಯದಲ್ಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರವು ಈ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದರು.
ಇಲೆಕ್ಟೋರಲ್ ಬಾಂಡ್: ಚುರುಕಾದ ವಿಪಕ್ಷಗಳು, ಪ್ರಧಾನಿ ಮೋದಿಯ ಮೇಲೆ ಮಾತಿನ ಬಾಣ
ಇಂದು ಸುಪ್ರೀಂ ಕೋರ್ಟಿನಲ್ಲಿ ಇಲೆಕ್ಟೋರಲ್ ಬಾಂಡ್ ವಿಷಯದಲ್ಲಿ ಭಾರೀ ಮುಜುಗರವನ್ನು ಎದುರಿಸಿದ್ದು, ಕೋರ್ಟ್ ನಾಳೆ ಸಂಜೆಯೊಳಗೆ ಮಾಹಿತಿಯನ್ನು ಬಹಿರಂಗಪಡಿಸುವಂತೆ SBIಗೆ ಸೂಚಿಸಿದೆ. ಇದು ವಿಪಕ್ಷಗಳಿಗೆ ದಾಳವಾಗಿ ದೊರಕಿದ್ದು, ಅವು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿವೆ.
ಇನ್ನು ನಾಳೆ ಮಾಹಿತಿ ಬಹಿರಂಗವಾದರೆ ಮತ್ತಷ್ಟು ಚರ್ಚೆ ಕಾವೇರಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರವು ವಿವಾದಸ್ಪದ CAA ಜಾರಿಗೆ ತರಲು ಯೋಚಿಸುತ್ತಿದೆ ಎಂದು ರಾಜಕೀಯ ತಜ್ಞರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.