ಹೈದರಾಬಾದ್: ತಂದೆ ವಿದೇಶದಿಂದ ತಂದ ಚಾಕಲೇಟ್ ತಿನ್ನಲು ಹೋಗಿ ಒಂಭತ್ತು ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ದುರಂತ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ನಡೆದಿದೆ.
ಬಾಲಕನ ತಂದೆ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಬರುವಾಗ ಅಲ್ಲಿಂದ ಅವರ ಮಕ್ಕಳಿಗೆಂದು ಚಾಕಲೇಟ್ ತಂದಿದ್ದಾರೆ. ಅದನ್ನು 9 ವರ್ಷದ ಸಂದೀಪ್ ಸಿಂಗ್ ಶಾಲೆಗೆ ತೆಗೆದುಕೊಂಡು ಹೋಗಿದ್ದನು. ಶಾಲೆಯಲ್ಲಿ ಚಾಕಲೇಟ್ ತಿನ್ನುವಾಗ ಅವನ ಗಂಟಳಲ್ಲಿ ಸಿಲುಕಿ ಉಸಿರುಗಟ್ಟಿಒದ್ದಾಡಿದ್ದಾರೆ. ವಿಷಯ ತಿಳಿದ ಶಿಕ್ಷಕಿ ಶಾಲಾ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು, ತಕ್ಷಣವೇ ಅಲ್ಲಿನ ಎಂಜಿಎಂ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತ ಪಟ್ಟಿದ್ದಾನೆ.
ಸಂದೀಪ್ ಸಿಂಗ್ ಬಾಲಕ ನಗರದ ಶಾರದಾ ಪ್ರೌಢಶಾಲೆಯಲ್ಲಿ 2 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 9 ವರ್ಷದ ಪುಟ್ಟ ಬಾಲಕನಾಗಿದ್ದಾನೆ.
ಬಾಲಕನ ತಂದೆ ಕಂಗನ್ ಸಿಂಗ್ ಅವರು ಮೂಲತಃ ರಾಜಸ್ಥಾನದವರಾಗಿದ್ದು, ಎಲೆಕ್ಟ್ರಿಕಲ್ ಅಂಗಡಿ ನಡೆಸುತ್ತಿದ್ದು, ಕಳೆದ 20 ವರ್ಷಗಳಿಂದ ವಾರಂಗಲ್ನಲ್ಲಿ ತನ್ನ ಕುಟುಂಬದೊಂದಿಗೆ ಬಂದು ನೆಲೆಸಿದ್ದರು. ಆದರೆ ಮಗನಿಗೆಂದು ಪ್ರೀತಿಯಿಂದ ತಂದ ಚಾಕಲೇಟ್ ಅವನ ಸಾವಿಗೆ ಕಾರಣವಾಗಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.