ಪ್ರತಿ ದಂಪತಿಗಳು ಮೂರು ಮಕ್ಕಳಿಗೆ ಜನ್ಮ ನೀಡಬೇಕು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಲಾಗಿ ಮಕ್ಕಳನ್ನು ಹೊಂದಲು ಮಹಿಳೆಯರೇನು ಮೊಲಗಳೇ? ಎಂದು ಅವರು ಕೇಳಿದ್ದಾರೆ. ದೇಶದಲ್ಲಿ ನಿರುದ್ಯೋಗ ಹೆಚ್ಚಿದ್ದು, ಖಾಲಿ ಕುಳಿತಿರುವ ಮಕ್ಕಳಿಗೆ ಉದ್ಯೋಗ ನೀಡಲು ಯಾರೂ ಸಿದ್ಧರಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದೆ. ಮಕ್ಕಳನ್ನು ಪಡೆದ ಮಾತ್ರಕ್ಕೆ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ನಿರುದ್ಯೋಗಿ ಹುಡುಗರಿಗೆ ಹುಡುಗಿಯರನ್ನು ಕೊಡಲು ಯಾರೂ ಇಷ್ಟಪಡುವುದಿಲ್ಲ. ಅವರು ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ಎಂದು ಅವರು ಹೇಳುತ್ತಾರೆ. ಸಾಲಾಗಿ ಮಕ್ಕಳನ್ನು ಹೊಂದಲು ಹೆಂಗಸರು ಏನಾದರೂ ಮೊಲಗಳೇ..? ಈ ಮಾತು ಹೇಳುವವರು ಎಷ್ಟು ಮಕ್ಕಳನ್ನು ಹೊಂದಿದ್ದಾರೆ? ಈ ವಿಷಯದಲ್ಲಿ ಅವರ ಅನುಭವ ಎಷ್ಟು ಎನ್ನುವುದು ಚೆನ್ನಾಗಿ ತಿಳಿದಿದೆ ಎಂದು ರೇಣುಕಾ ಚೌಧರಿ ಕಟುವಾದ ಟೀಕಿಸಿದ್ದಾರೆ.