Home ಅಂಕಣ ಗೌರಿ ನೆನಪು | ಸನಾತನ ಭಾರತ ನಮಗೆ ಬೇಕಿಲ್ಲ, ನಮಗೆ ಬೇಕಿರುವುದು ಗಾಂಧೀಯ ಗ್ರಾಮ ಸ್ವರಾಜ್ಯದ...

ಗೌರಿ ನೆನಪು | ಸನಾತನ ಭಾರತ ನಮಗೆ ಬೇಕಿಲ್ಲ, ನಮಗೆ ಬೇಕಿರುವುದು ಗಾಂಧೀಯ ಗ್ರಾಮ ಸ್ವರಾಜ್ಯದ ಭಾರತ: ಶೈಲಜಾ ಟೀಚರ್

0

ನಾವು ಭಾರತ ಎಂದಾಗ ನಮ್ಮ ಮನದಲ್ಲಿ ಹುಟ್ಟುವ ಸ್ವಾತಂತ್ರ್ಯ ಹೋರಾಟಗಾರರ ಕಲ್ಪನೆ ಹೇಗಿರುತ್ತದೆ? ರವೀಂದ್ರನಾಥ್‌ ಟಾಗೋರ್‌ ಅವರು ಹೇಳುವಂತೆ,

ಎಲ್ಲಿ ತನ್ನ ಮನದಾಳದ ಆಲೋಚನೆಗಳನ್ನು ಹೊರಗೆಡವಲು ಆತಂಕವಿರುವುದಿಲ್ಲವೋ, ಎಲ್ಲಿ ಹರಿಯುತ್ತಿರುವ ನೀರಿನಂತೆ ಆಲೋಚನೆಗಳು ನಿರ್ಭಯವಾಗಿ ಹರಿಯಬಲ್ಲವೋ, ಸತ್ತ ರೂಢಿಗಳನ್ನು ಮೀರಿದ ಮಾನವತೆ ಹರಡಬಲ್ಲದೋ ಓ ತಂದೆಯೇ ಅಂತಹ ನೆಲವನ್ನು ನನ್ನದಾಗಿಸು

ಭಾರತವು ಇಂತಹ ನೆಲ ಆಗಿರಬೇಕಿತ್ತು. ಆದರೆ ಈಗ ಸತ್ತ ರೂಢಿಗಳು ಮತ್ತೆ ಎದ್ದು ಬರುತ್ತಿವೆ, ಸನಾತನ ಧರ್ಮ ಬರುತ್ತಿದೆ, ಅವರು ಚಾತುರ್ವೃಣದ ಪರವಾದವರು, ಇದನ್ನು ದೇವರೇ ಸೃಷ್ಟಿಸಿದ್ದು ಎಂದು ಹೇಳುತ್ತಾರೆ. ದೇವರು ಹಾಗೆ ಹೇಳಿದ್ದಾರಾ? ಚಾತುರ್ವರ್ಣ ಎಂದರೆ ಬ್ರಾಹ್ಮಣ ತಲೆಯಿಂದ, ಕ್ಷತ್ರಿಯ ಬಾಹುಗಳಿಂದ, ವೈಶ್ಯ ತೊಡೆಯಿಂದ ಮತ್ತು ಶೂದ್ರ ಕಾಲಿನಿಂದ ಹುಟ್ಟಿಸಲ್ಪಟ್ಟ ಎನ್ನುತ್ತಾರೆ. ಇದು ನಮ್ಮ ಧರ್ಮ ಎಂದು ಹೇಗೆ ಒಪ್ಪಲು ಸಾಧ್ಯ? ಇದು ನಿಮ್ಮ ಸನಾತನ ಧರ್ಮವಾದರೆ ನಾವು ಅದನ್ನು ಎಂದೂ ಒಪ್ಪುವುದಿಲ್ಲ ನಾವು ಸಮಾನತೆಗಾಗಿ ಇದ್ದೇವೆ, ಗಾಂಧೀಜಿಯವರ ಕಲ್ಪನೆಯಂತಹ ಗ್ರಾಮ ಸ್ವರಾಜಕ್ಕಾಗಿ ಇದ್ದೇವೆ. ಅವರು ಮೇಲ್ಜಾತಿಗಳ ಮೇಲಾಧೀಕಾರವನ್ನು ಎತ್ತಿಹಿಡಿಯುತ್ತಾ ದಲಿತರನ್ನು ಶೋಷಿಸುತ್ತಿದ್ದಾರೆ. ಅವರು ಅಧಿಕಾರಕ್ಕಾಗಿ ಮಾತ್ರವೇ ನಿಂತಿದ್ದಾರೆ. ಒಮ್ಮೆ ಮತ್ತೆ ಅವರ ಕೈಗೆ ಅಧಿಕಾರ ಸಿಕ್ಕರೆ ಅವರು ಚುನಾವಣೆಗಳನ್ನೂ ನಡೆಸದಿರಬಹುದು


ಹಿಂದುತ್ವ ಸಿದ್ಧಾಂತ ಸಂಪೂರ್ಣವಾಗಿ ಜನರನ್ನು ಒಡೆಯುವಂಥದ್ದು. ಅದಕ್ಕಾಗಿಯೇ ಅವರು ಅವರ ಆಲೋಚನೆಗಳನ್ನು ಒಪ್ಪದವರನ್ನು ಕೊಲ್ಲುತ್ತಾರೆ ಧಾಬೋಲ್ಕರ್‌, ಪನ್ಸಾರೆ, ಕಲಬುರ್ಗಿ ಮತ್ತು ನಮ್ಮ ಪ್ರೀತಿಯ ಗೌರಿಯನ್ನು ಅದಕ್ಕಾಗಿ ಕೊಂದರು. ಅವರು ದಬ್ಬಾಳಿಕೆಯಿಂದ ಜನರನ್ನು ನಿಯಂತ್ರಿಸುತ್ತಾರೆ.


ದೇಶದ ಸಂಕೇತವಾಗಿರುವಮಹಾತ್ಮಾ ಗಾಂಧಿಯವರನ್ನು ಅವರ ಸ್ಥಾನದಿಂದ ಸ್ಥಾನಪಲ್ಲಟಗೊಳಿಸಲು ಎಷ್ಟು ಧೈರ್ಯ ಅವರಿಗೆ? ಗಾಂಧಿಯವರ ಕೊಲೆ ಮಾಡಿದ ಸಿದ್ಧಾಂತಕ್ಕೆ ಸೇರಿದ ಸಾವರ್ಕರ್‌ ಅವರನ್ನು ಅವರ ಮುಂದಿಡಲು ಇವರು ಯಾರು?


ನಮ್ಮ ದೇಶ ಇಂದು ಹತ್ತಿ ಉರಿಯುತ್ತಿದೆ. ಮಣಿಪುರ ಹರ್ಯಾಣ ಎಲ್ಲೆಡೆ ಇದೇ ನಡೆಯುತ್ತಿದೆ. ಈ ಸನಾತನ ಧರ್ಮದವರು ಗೂಂಢಾಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ.


ಮಣಿಪುರದ ಬಗ್ಗೆ ಕೊನೆಗೂ ಪ್ರಧಾನಮಂತ್ರಿ ಮಾತಾಡಲು ಅವಿಶ್ವಾಸ ನಿರ್ಣಯ ಮಾಡಬೇಕಾಯಿತು, ಅದರಲ್ಲೂ ತನ್ನ ಒಂದೂವರೆ ಗಂಟೆಯ ಭಾಷಣದ ಕೊನೆಯ ಎರಡು ನಿಮಿಷ ಮಾತ್ರ ಅದಕ್ಕಾಗಿ ಮೀಸಲಾಯಿತು.


ಕೋವಿಡ್‌ ಬಂದಾಗ ಸಾಮಾನ್ಯ ಜನರು ಬಳಲಿದರು. ಕೇರಳದಲ್ಲಿ ಇದಕ್ಕೆ ಪರಿಹಾರವೇನು, ವೈಜ್ಞಾನಿಕವಾಗಿ ಇದನ್ನು ಬದಲಿಸುವುದು ಹೇಗೆ ಎಂದು ಪ್ರಯತ್ನ ನಡೆಸುತ್ತಿದ್ದೆವು, ಇವರು ತಟ್ಟೆಗಳನ್ನು ಬಡಿಯುತ್ತಿದ್ದರು, ಮೈತುಂಬ ಸೆಗಣಿ ಮೆತ್ತಿಕೊಳ್ಳಲು ಹೇಳಿದರು ಮೂಢನಂಬಿಕೆ ಬಿತ್ತಿದರು.


ಗೌರಿ ನಮ್ಮ ಜೊತೆ ಇದ್ದಾರೆ, ನಾವು ನಮ್ಮ ದೇಶವನ್ನು ಉಳಿಸಬೇಕಿದೆ, ದೇಶದ ಸ್ವಾಯತ್ತತೆಯನ್ನು, ಪ್ರಜಾತಂತ್ರವನ್ನು ಉಳಿಸಿಕೊಳ್ಳಬೇಕಿದೆ, ನಾವೆಲ್ಲರೂ ಒಗ್ಗೂಡಿ ಹೋರಾಡಬೇಕಿದೆ.

You cannot copy content of this page

Exit mobile version