Home ರಾಜ್ಯ ಅಪ್ಪನ ಬಳುವಳಿಯೇ ಸಾಕು, ಎಮ್‌ ಪಿ ಟಿಕೆಟ್‌ ಬೇಡ: ನಟ ಶಿವರಾಜ್‌ ಕುಮಾರ್

ಅಪ್ಪನ ಬಳುವಳಿಯೇ ಸಾಕು, ಎಮ್‌ ಪಿ ಟಿಕೆಟ್‌ ಬೇಡ: ನಟ ಶಿವರಾಜ್‌ ಕುಮಾರ್

0

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್‌ ಅವರು ಕನ್ನಡ ಚಿತ್ರನಟ ಶಿವರಾಜ್‌ಕುಮಾರ್‌ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ನೀಡುವುದಾಗಿ ಘೋಷಿಸಿದ್ದರು. ಆದರೆ ನಟ ಶಿವರಾಜ್‌ಕುಮಾರ್ ಈ ಆಫರ್‌ ತಿರಸ್ಕರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಿವರಾಜಕುಮಾರ್‌ ನನಗೆ ಅಪ್ಪ ಬಳವಳಿಯಾಗಿ ಕೊಟ್ಟ ನಟನೆಯ ವೃತ್ತಿಯೊಂದೇ ಸಾಕು, ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್‌ ಅವರು ನಿನ್ನೆ ಶಿವಣ್ಣನಿಗೆ ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಆದರೆ ಆಗ ಶಿವಣ್ಣ ಇಲ್ಲ ಈಗಾಗಲೇ ನಾನು ಐದಾರು ಸಿನೆಮಾ ಒಪ್ಪಿಕೊಂಡಿದ್ದೇನೆ. ಹೀಗಾಗಿ ರಾಜಕಾರಣಕ್ಕೆ ಬರಲು ಸಾಧ್ಯವಿಲ್ಲ ಎಂದು ನಯವಾಗಿ ಉಪಮುಖ್ಯಮಂತ್ರಿ ನೀಡಿದ್ದ ಆಫರ್‌ ತಿರಸ್ಕರಿಸಿದ್ದರು.

ಆದರೆ ಮತ್ತೆ ಒತ್ತಾಯಿಸಿದ ಡಿಕೆಶಿಯವರು “ಸಿನೆಮಾ ಮಾಡುವುದು ಯಾವಾಗಲೂ ಇರುತ್ತೆ, ಈಗ ರಾಜಕಾರಣದ ಅವಕಾಶ ಬಂದಿದೆ ಒಪ್ಪಿಕೊಳ್ಳಿ” ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ “ನಮ್ಮ ತಂದೆ ಕೊಟ್ಟಿರುವ ಬಳವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್‌ ಹಾಕೋದು, ಸಿನಿಮಾ ಮಾಡೋದು. ರಾಜಕೀಯ ನಮಗೆ ಬೇಡ, ಅದನ್ನು ಮಾಡೋಕೆ ಬೇರೆಯವರು ಇದ್ದಾರೆ. ನನಗೆ ರಾಜಕೀಯ ಬೇಡ” ಎಂದು ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದಾರೆ

You cannot copy content of this page

Exit mobile version