ಉತ್ತರ ಪ್ರದೇಶ : ಯುಪಿಯ ಲಖೀಮ್ಪುರದಲ್ಲಿ ಇಬ್ಬರು ದಲಿತ ಸಹೋದರಿಯರ ಮೇಲೆ ಅತ್ಯಾಚಾರವನ್ನೆಸಗಿ ದಾರುಣವಾಗಿ ಹತ್ಯೆ ಮಾಡಿ ಕೊಲೆ ಮಾಡಿದ ಆರೋಪದಲ್ಲಿ 6 ಮಂದಿ ಅತ್ಯಾಚಾರಿಗಳನ್ನು ಅಲ್ಲಿನ ಪೋಲೀಸರು ಬಂಧಿಸಿದ್ದಾರೆ.
ಲಖೀಮ್ ಪುರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಇಬ್ಬರು ದಲಿತ ಸಹೋದರಿಯರ ಶವ ಪತ್ತೆಯಾಗಿದ್ದು ಘಟನೆಯ ಬಗ್ಗೆ ತನಿಖೆ ಮಾಡಿದಾಗ ಚೋಟು, ಜುನಾಯಿದ್, ಸುಹೇಲ್, ರಹೀಮ್, ಕರೀಮುದ್ದೀನ್, ಆರೀಫ್ ಈ ಆರು ಮಂದಿ ಈ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪ್ರಾಪ್ತ ಹುಡುಗಿಯರ ತಾಯಿ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಆದರೆ ಅಲ್ಲಿನ ಪ್ರತ್ಯಕ್ಷದರ್ಶಿಗಳು ಇದು ಬಲವಂತದ ಅಪಹರಣ ಅಲ್ಲವೆಂದು ಸಾಬೀತುಪಡಿಸಲು ಪ್ರಯತ್ನಿಸುತಿದ್ದಾರೆ ಆದ್ದರಿಂದ ಮರಣೋತ್ತರ ಪರೀಕ್ಷೆ ನಡೆದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಲಖೀಮ್ಪುರದ ಎಸ್ ಪಿ ಸಂಜೀವ್ ಸುಮನ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನಲೆ : ಶವವಾಗಿ ಪತ್ತೆಯಾದ ಇಬ್ಬರು ಹೆಣ್ಣು ಮಕ್ಕಳು ಚೋಟುವಿನ ಸ್ನೇಹಿತೆಯರಾಗಿದ್ದರು. ಚೋಟು ಇವರಿಬ್ಬರನ್ನು ಅವನ 3 ಜನ ಗೆಳೆಯರಿಗೆ ಪರಿಚಯ ಮಾಡಿಸಿದ್ದ. ನೆನ್ನೆ ಆ ಗೆಳೆಯರೇ ಮೋಟರ್ ಬೈಕ್ನಲ್ಲಿ ಇಬ್ಬರು ಹುಡುಗಿಯರನ್ನು ಬಿಟ್ಟಿದ್ದರು. ತದನಂತರ ಹುಡುಗಿಯರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ಕೊಟ್ಟಿದ್ದರು. ಹುಡುಗಿಯರು ಮದುವೆ ಮಾಡಿಕೊಳ್ಳಲು ಕೇಳಿದಾಗ ಅದಕ್ಕೆ ಒಪ್ಪದ ಕೊಲೆಗಡುಕರು ಮತ್ತಿಬ್ಬರು ಸ್ನೇಹಿತರನ್ನು ಕರೆಸಿ ಅತ್ಯಾಚಾರ ಮಾಡಿ ಆ ಹುಡುಗಿಯರ ದುಪ್ಪಟ್ಟದಿಂದಲೇ ಅವರನ್ನು ಬಿಗಿದು ಮರಕ್ಕೆ ನೇಣಿಗೆ ಹಾಕಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಎಸ್ಪಿ ಸಂಜಯ್ ಸುಮನ್ ಸದ್ಯದ ಮಾಹಿತಿ ನೀಡಿದ್ದಾರೆ.