Home ಸಿನಿಮಾ ರವಿಕೆಯ ಒಂದು ಸಣ್ಣ ವಿಚಾರ, ನಿಜವಾಗ್ಲೂ ನ್ಯಾಷನಲ್ ಇಶ್ಯೂ ಆಗುತ್ತಾ ?

ರವಿಕೆಯ ಒಂದು ಸಣ್ಣ ವಿಚಾರ, ನಿಜವಾಗ್ಲೂ ನ್ಯಾಷನಲ್ ಇಶ್ಯೂ ಆಗುತ್ತಾ ?

0

“ಕರ್ನಾಟಕದ ಬೆಸ್ಟ್ ಟ್ರೈಲರ್” ಅನ್ನು ಗುರುತಿಸುವ ಕಂಟೆಸ್ಟ್ ಲಾಂಚ್ ಮಾಡುವ ಮೂಲಕ, ಹೀಗೊಂದು ವಿಶೇಷ ಕಾರ್ಯಕ್ರಮದ ಮೂಲಕ ಸಿನಿಮಾ ಒಂದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಆ ಸಿನಿಮಾದ ಹೆಸರೇ “ರವಿಕೆ ಪ್ರಸಂಗ”.

“ರವಿಕೆ‌ಪ್ರಸಂಗ” ಚಿತ್ರವೂ ಇದೇ ಫೆಬ್ರವರಿ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು, ಇಂದು ಅಂದರೇ ಫೆಬ್ರವರಿ 4ರಂದು ಚಿತ್ರದ ಪ್ರೀ ರಿಲೀಸ್ ಇವೆಂಟನ್ನು ಫೋರಮ್ ಮಾಲ್ ಕನಕಪುರದಲ್ಲಿ ಆಯೋಜಿಸಿತ್ತು
ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಅವರು, ಕಥೆಗಾರ್ತಿ ಮತ್ತು ಸಂಭಾಷಣಾಗಾರ್ತಿ ಪಾವನ ಸಂತೋಷ್, ಚಿತ್ರದ ನಾಯಕಿಯಾದ ಗೀತಾಭಾರತಿ ಭಟ್, ಪದ್ಮಜಾರಾವ್, ಜೊತೆಗೆ ಪೋಷಕ ಕಲಾವಿದರು, ಚಿತ್ರದ ಸಂಕಲನಾಕಾರರಾದ ರಘು ಉಪಸ್ಥಿತರಿದ್ದರು.
ಬಹಳ ವಿಶೇಷವಾಗಿ ಸ್ಟೇಜ್ ಮೇಲೆ “ಕರ್ನಾಟಕದ ಬೆಸ್ಟ್ ಟೈಲರ್” ಅನ್ನು ಗುರುತಿಸುವ ಕಂಟೆಸ್ಟ್ ಲಾಂಚ್ ಮಾಡಲಾಯಿತು.‌

ಬೆಸ್ಟ್ ಟೈಲರನ್ನು ಗುರುತಿಸಿ ಭರ್ಜರಿ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ವಿಜೇತರಾದವರಿಗೆ, ಹೊಲಿಗೆ ಯಂತ್ರ, ಮೊಬೈಲ್ ಫೋನ್ ಹಾಗೂ ಸಿನೇಮಾ ಟಿಕೆಟ್ ನೀಡಲಾಗುವುದು‌ ಎಂದು ಚಿತ್ರತಂಡ ಸ್ಟೇಜಿನ ಮೇಲೆ ಹೇಳಿಕೊಂಡಿದೆ.
ಬಹಳ ಮುಖ್ಯವಾಗಿ ರಾಜ್ಯದ್ಯಾಂತ 7ಸಾವಿರಕ್ಕೂ ಹೆಚ್ಚಿನ ಆಟೋ ಪಬ್ಲಿಸಿಟಿ ಮಾಡುತ್ತಿರುವ ರವಿಕೆಪ್ರಸಂಗ ಚಿತ್ರತಂಡ ಆಟೋ ಡ್ರೈವರ್ ಗಳೊಂದಿಗೆ ಒಂದಷ್ಟು ಸಿನಿಮಾದ ಬಗ್ಗೆ ಚರ್ಚಿಸಿ ಗೀತಾಭಾರತಿಭಟ್ ಅವರು ಅನೇಕ ಆಟೋಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೇ ನೀಡಿದರು.
ಸಿನೇಮಾ ಕುರಿತು ಹಲವು ಗಣ್ಯರು ಈ ಸಂದರ್ಭದಲ್ಲಿ ಮಾತನಾಡಿದರು. ಜೊತೆಗೆ ಎಲ್ಲರನ್ನೂ ಗೌರವಿಸಲಾಯಿತು. ನಿರ್ದೇಶಕ ಸಂತೋಷ್‌ ಕೊಂಡಕೇರಿಯವರು , ಚಿತ್ರದ ಬಗ್ಗೆ ಮಾತನಾಡುತ್ತಾ “ಒಂದು ರವಿಕೆಗೆ ಹುಕ್ ಹೇಗೆ ಮುಖ್ಯವೋ ಹಾಗೇ ಜೀವನದ ಕೆಲವು ಸಂಘರ್ಷಗಳು, ಸಂಬಂಧಗಳು ಅತೀ ಮುಖ್ಯವಾಗುತ್ತವೆ” ಎಂಬುದೇ ಈ “ರವಿಕೆ ಪ್ರಸಂಗ” ಸಿನಿಮಾದ ಕಥಾಹಂದರ ಎಂದು ಹೇಳಿಕೊಂಡಿದ್ದಾರೆ.

You cannot copy content of this page

Exit mobile version