Home ಸಿನಿಮಾ ನಾಡಪ್ರಭು ಕೆಂಪೇಗೌಡ ಸಿನೆಮಾ: ನಿರ್ದೇಶಕ ನಾಗಾಭರಣ ವಿರುದ್ಧ ಕೇಸು!

ನಾಡಪ್ರಭು ಕೆಂಪೇಗೌಡ ಸಿನೆಮಾ: ನಿರ್ದೇಶಕ ನಾಗಾಭರಣ ವಿರುದ್ಧ ಕೇಸು!

0

ಬೆಂಗಳೂರು: ನಟರಾಕ್ಷಸ ಧನಂಜಯ ಅಭಿನಯದ ನಾಡಪ್ರಭು ಕಂಪೇಗೌಡ ಚಿತ್ರ ಆರಂಭಕ್ಕೂ ಮುನ್ನವೇ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಚಿತ್ರದ ನಿರ್ದೇಶಕ ಟಿ ಎಸ್‌ ನಾಗಾಭರಣ ಅವರ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.

ಚಿತ್ರದ ಶೀರ್ಷಿಕೆ ಕುರಿತು ತಕರಾರು ಆರಂಭವಾಗಿದ್ದು, ಆ ಟೈಟಲ್‌ ನಮ್ಮದು ಎಂದು ಒಬ್ಬರು ಪ್ರಕರಣ ದಾಖಲಿಸಿದ್ದಾರೆ.

ಚಿತ್ರ ನಿರ್ಮಾಪಕಾರಿಗಿರುವ ಕಿರಣ್‌ ತೋಟಂಬೈಲ್ ಅವರು ನಾಗಾಭರಣ ವಿರುದ್ಧ ದೂರು ನೀಡಿದ್ದಾರೆ.‌

ಅವರ ದೂರಿನಂತೆ ಅವರು ರ್ಮಭೀರು ನಾಡಪ್ರಭು ಕೆಂಪೇಗೌಡ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ಟಿ.ಎಸ್.‌ ನಾಗಾಭರಣ ಅವರು ನಾಡಪ್ರಭು ಕೆಂಪೇಗೌಡ ಟೈಟಲ್‌ ರಿಜಿಸ್ಟರ್‌ ಮಾಡಿಸಿ, ಸಿನಿಮಾ ಘೋಷಿಸಿದ್ದಾರೆ. ಇದರಿಂದಾಗಿ ತಮ್ಮ ಚಿತ್ರಕ್ಕೆ ತೊಂದರೆಯಾಗುತ್ತದೆ ಎಂದು ಅವರು ದೂರು ನೀಡಿದ್ದಾರೆ.

ಕಳೆದ ಮೂರು ದಿನಗಳ ಹಿಂದಷ್ಟೇ ಡಾಲಿ ಧನಂಜಯ ನಾಡಪ್ರಭು ಕೆಂಪೇಗೌಡ ಚಿತ್ರದ ಕುರಿತು ಅನೌನ್ಸ್‌ ಮಾಡಿದ್ದರು. ಈ ಚಿತ್ರಕ್ಕೆ ಟಿಎಸ್‌ ನಾಗಾಭರಣ ನಿರ್ದೇಶಕರಾದರೆ, ವಾಸುಕಿ ವೈಭವ್‌ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಆದರೆ ಈಗ ಚಿತ್ರದ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಈ ಕುರಿತು ನಾಡಪ್ರಭು ಕೆಂಪೇಗೌಡ ತಂಡ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

You cannot copy content of this page

Exit mobile version