Home ದೆಹಲಿ ಮೋದಿ ಸರ್ಕಾರದಿಂದ ಜೆನ್‌ ಝೀ ಪೀಳಿಗೆಗೆ ವಿಶ್ವಾಸದ್ರೋಹ: ಸೆ. 5ರಂದು ಸಿಜೆಪಿಯಿಂದ ದೆಹಲಿಯಲ್ಲಿ ಮತ್ತೊಂದು ಬೃಹತ್‌...

ಮೋದಿ ಸರ್ಕಾರದಿಂದ ಜೆನ್‌ ಝೀ ಪೀಳಿಗೆಗೆ ವಿಶ್ವಾಸದ್ರೋಹ: ಸೆ. 5ರಂದು ಸಿಜೆಪಿಯಿಂದ ದೆಹಲಿಯಲ್ಲಿ ಮತ್ತೊಂದು ಬೃಹತ್‌ ಪ್ರತಿಭಟನೆ

0

ಕೇಂದ್ರ ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ವಿಶ್ವಾಸದ್ರೋಹ ಬಗೆದಿದೆ ಎಂದು ಆರೋಪಿಸಿ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಬೃಹತ್ ಯುವಜನ ನಿರಸನ (ಪ್ರತಿಭಟನಾ) ರ್ಯಾಲಿಯನ್ನು ಹಮ್ಮಿಕೊಂಡಿದೆ.

ಜುಲೈ 25ರಂದು ವಿದ್ಯಾರ್ಥಿಗಳು ತಮ್ಮ ಚಳವಳಿಯನ್ನು ಹಿಂಪಡೆಯಲು ಕಾರಣವಾಗಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಿಜೆಪಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಂದು ದೆಹಲಿಯ ಇಂಡಿಯಾ ಗೇಟ್‌ನಿಂದ ನವದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ಈ ಪ್ರತಿಭಟನಾ ರ್ಯಾಲಿ ನಡೆಯಲಿದೆ ಎಂದು ಪಕ್ಷ ಘೋಷಿಸಿದೆ.

ಆತ್ಮಹತ್ಯೆ ಮಾಡಿಕೊಂಡ ನೀಟ್ (NEET) ಆಕಾಂಕ್ಷಿ ವಿದ್ಯಾರ್ಥಿಗಳ ಕುಟುಂಬಸ್ಥರು ಹಾಗೂ ಜುಲೈ 20ರಂದು ನಡೆದ ಪೊಲೀಸ್ ಕ್ರಮಕ್ಕೆ ಒಳಗಾದ ಸಂತ್ರಸ್ತರು ಈ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದು ಪಕ್ಷದ ಮುಖಂಡ ಸೌರವ್ ತಿಳಿಸಿದ್ದಾರೆ. ಜೆನ್-ಝೀ (Gen-Z) ಯುವಜನತೆಗೆ, ಹೋರಾಟಗಾರರಿಗೆ ಹಾಗೂ ಮೃತರ ಕುಟುಂಬಗಳಿಗೆ ಎಸಗಲಾದ ಈ ವಿಶ್ವಾಸದ್ರೋಹವನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಅವರು, ಮೋದಿ ಸರ್ಕಾರಕ್ಕೆ ಉತ್ತರದಾಯಿತ್ವವೇ ಇಲ್ಲ ಎಂದು ಕಿಡಿಕಾರಿದ್ದಾರೆ.

You cannot copy content of this page

Exit mobile version