ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.
ಮಾನವ ಸಂಘ ಜೀವಿ. ಹಾಗೆಯೇ ಮದುವೆ ಎಂಬ ಸಾಮಾಜಿಕ ಬಂಧನದ ಮೂಲಕವೇ ಮನುಷ್ಯ ತನ್ನ ಲೈಂಗಿಕ ಆಸಕ್ತಿಯನ್ನು ಪೂರೈಸಿಕೊಳ್ಳಲು ಸಮಾಜ ಅವಕಾಶ ನೀಡಿದೆ. ಕದ್ದು ತಿನ್ನುವ ಹಣ್ಣೇ ರುಚಿ ಎನ್ನುವಂತೆ ಕೆಲವರು ಲೈಂಗಿಕ ತೃಪ್ತಿಗಾಗಿ ವಿಭಿನ್ನ ಮಾರ್ಗಗಳನ್ನು ಬಳಸುತ್ತಾರೆ.
ತೃತೀಯ ಲಿಂಗಿಗಳಲ್ಲಿ ಕೆಲವರು ಸೇರಿದಂತೆ ವೇಶ್ಯಾವಾಟಿಕೆಗಳು ಈ ನಿಟ್ಟಿನಲ್ಲಿ ಲೈಂಗಿಕ ಹಿತಾಸಕ್ತಿ ಪೂರೈಕೆ ಕಾರ್ಯವನ್ನು ನಡೆಸಿಕೊಂಡು ಬರುತ್ತಾರೆ. ಈ ಕಾರಣಗಳಿಗಾಗಿಯೇ ಲೈಂಗಿಕ ರೋಗಗಳು ಮನುಕುಲದ ಬೆನ್ನು ಬಿಡದಂತೆ ಕಾಡುತ್ತಲೇ ಬಂದಿವೆ. ಅವುಗಳಲ್ಲಿ ಏಡ್ಸ್ ಒಂದು ಮಹಾಮಾರಿ. ಮಹಾನಗರಗಳಲ್ಲಿ ವೇಶ್ಯಾವಾಟಿಕೆಗಳು ಇರುವ ಕೆಲವು ಏರಿಯಾಗಳೇ ಇವೆ. ಅವು ಇಂದಿಗೂ ಜೀವಂತ ಇವೆ. ರಾಜಮಹಾರಾಜರ ಕಾಲದಿಂದಲೂ ಸಹ ವೇಶ್ಯಾವಾಟಿಕೆಗಳು ಇದ್ದೇ ಇವೆ. ಹಾಗೆಯೇ ಲೈಂಗಿಕ ರೋಗಗಳು, ಗುಪ್ತ ರೋಗಗಳು ಸಹ ಇದ್ದೇ ಇವೆ.
ಚಿಕ್ಕ ವಯಸ್ಸಿನಲ್ಲಿಯೇ ಈ ಮಾರಕ ಲೈಂಗಿಕ ರೋಗಕ್ಕೆ ತುತ್ತಾದ ಯುವಜನತೆ ಬಹಳ ನೋವಿನ ಜೀವನ ನಡೆಸುತ್ತಿದೆ.
ಇನ್ನು ಕರ್ನಾಟಕದ ಅಂಕಿ ಸಂಖ್ಯೆ ಗಮನಿಸಿದರೆ ಬೆಳಗಾವಿಯಲ್ಲಿ ಮೂವತ್ತೆಂಟು ಸಾವಿರ ಮಂದಿಗೆ ಹೆಚ್ ಐವಿ ಪಾಸಿಟಿವ್ ಇದೆ. ಇವರು ನೊಂದಾಯಿತ ಏಡ್ಸ್ ರೋಗಿಗಳು. ಅಲ್ಲಿಯ ಒಟ್ಟು ಜನಸಂಖ್ಯೆ ಸುಮಾರು ೨೭ ಲಕ್ಷವಿದೆ. ಇವರಲ್ಲಿಯೇ ಇಪ್ಪತ್ತು ಸಾವಿರ ವಿಧವೆಯರಿದ್ದಾರೆ. ಇವರು ಗ್ರಾಮೀಣ, ನಗರ ಪ್ರದೇಶಗಳಲ್ಲಿ ಸಹ ಇದ್ದು ಇವರ ಪತಿ ವಿವಾಹದ ಒಂದೆರಡು ವರ್ಷಗಳಲ್ಲಿ ಏಡ್ಸ್ ರೋಗದಿಂದಾಗೇ ತೀರಿಹೋಗಿದ್ದಾರೆ.
ಹೀಗೆ ಏಡ್ಸ್ ಹಬ್ಬಲು ಕಾರಣ ಅಸುರಕ್ಷಿತ ಲೈಂಗಿಕ ಸಂಪರ್ಕ. ಕಾಂಡೂಂ ಇಲ್ಲದೆಯೇ ಸೆಕ್ಸ್ ಮಾಡಬೇಕೆಂದು ಒತ್ತಾಯಿಸುವ ಕ್ಲೈಂಟ್ ಗಳು ಹೆಚ್ಚಿನ ಹಣದ ಆಮಿಶ ತೋರಿದ್ದರು ಎಂಬುದು ಹಲವಾರು ಏಡ್ಸ್ ರೋಗಿಗಳ ಅಳಲು.
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಂದು ವಿದ್ಯಾರ್ಥಿಗಳು ಏಡ್ಸ್ ಬಾಧಿತರಾಗುತ್ತಿದ್ದಾರೆ. ಪ್ರೀತಿ ಪ್ರೇಮ ಪ್ರಣಯ ಅಂತ ಏಡ್ಸ್ ರೋಗ ಪೀಡಿತರಾಗುತ್ತಿದೆ ಯುವಜನತೆ.
ಮದುವೆಗೆ ಮುಂಚೆ ವಧು ವರರ ಹೆಚ್ ಐ ವಿ ಪರೀಕ್ಷೆ ಕಡ್ಡಾಯವಾಗುವುದು ಯಾವಾಗಲೋ ಗೊತ್ತಿಲ್ಲ. ಆದರೆ ಹಿರಿಯರು ಮಾಡಿದ ಮದುವೆ ನಂಬಿ ನೂರಾರು ಯುವತಿಯರು ಏಡ್ಸ್ ಗೆ ಬಲಿಯಾಗಿದ್ದುಂಟು. ಇತ್ತ ಪತಿಯೂ ಇಲ್ಲ, ಜೊತೆಗೆ ಏಡ್ಸ್ ರೋಗವೂ ಹಬ್ಬಿ ದುರ್ಬಲರಾಗುವ ನವವಿವಾಹಿತೆಯರ ಸಂಖ್ಯೆ ಸಾವಿರಾರಿದೆ.
ಸಂಯಮ ಯುವಜನತೆಯ ಹಾಡಾಗಬೇಕು. ಆಗಲೇ ಅವರು ಆದರ್ಶಯುತ ಜೀವನ ನಡೆಸಲು ಅವಕಾಶ ಒದಗುತ್ತದೆ.
ಸಂಯಮದ ಬದುಕಿಗಾಗಿ ನಮಗೆ ಆದರ್ಶಪ್ರಾಯವಾದ ಸ್ವಾಮಿ ವಿವೇಕಾನಂದರು ಕಸಲ್ಲ
ದೇಶ ಮೀರಿ ನಿಲ್ಲುವ ಸಾಧಕ. ಯುವ ಜನತೆ ಇವರ ಬದುಕನ್ನು ಹತ್ತಿರದಿಂದ ನೋಡಿ, ಗ್ರಹಿಸಿ ಓದಬೇಕು. ಆಗಲೇ ವೈಯಕ್ತಿಕ ಜೀವನದಲ್ಲಿ ಸಹ ಬದಲಾವಣೆ ಸಾಧ್ಯವಿದೆ.
ಮದುವೆಗೆ ಮುನ್ನ ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡದೆ ಸಂಯಮದಿಂದ ವರ್ತಿಸಿ ತಮ್ಮ ಯೌವನ ಮತ್ತು ಬದುಕನ್ನು ಶಕ್ತಿಯುತವಾಗಿ ಕಟ್ಟಿಕೊಳ್ಳಬೇಕಾದ ಹೊಣೆಗಾರಿಕೆ ಯುವಜನತೆಯ ಮೇಲಿದೆ.
ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.
ಏಡ್ಸ್ ಬಾಧಿತರಿಗೆ ಪ್ರೀತಿಪೂರ್ಣ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಅವರಿಗೂ ಬದುಕುವ ಅವಕಾಶ ಕಲ್ಪಿಸಿ ಕೊಡಬೇಕು. ಸರಿಯಾದ ಚಿಕಿತ್ಸೆ ನೀಡುವ ಮೂಲಕ ಆತ್ಮವಿಶ್ವಾಸ ಮೂಡಿಸಿ ಬದುಕಿನೆಡೆಗೆ ಸೆಳೆಯಬೇಕು.
ಏಡ್ಸ್ ಬಾಧಿತ ಇಬ್ಬರು ದಂಪತಿಗಳು ಧೈರ್ಯದಿಂದ ಸಾವನ್ನು ಎದುರಿಸಿ ಮೂವತ್ತು ವರ್ಷದ ದಾಂಪತ್ಯ ಜೀವನ ಪೂರೈಸಿದ್ದಾರೆ. ಇವರನ್ನು ಕಂಡಾಗ ಸಮಸ್ಯೆ ಇರದ ಅದೆಷ್ಟೋ ಗಂಡ ಹೆಂಡಿರು ಅನವಶ್ಯಕ ಜೀವನ ನರಕ ಮಾಡಿಕೊಂಡಿರುವುದು ನೆನಪಾಗುತ್ತದೆ. ಪರಸ್ಪರ ಸಂಗಾತಿ ಪ್ರೀತಿ, ಸಮಯಕ್ಕೆ ಸರಿಯಾದ ಔಷಧಿ ಸೇವನೆ, ಆರೋಗ್ಯಕರ ಅಭ್ಯಾಸಗಳು ಈ ದಂಪತಿಯನ್ನು ಸಾವಿನ ದವಡೆಯಿಂದ ಪಾರಾಗಿಸಿವೆ ಎನ್ನಬಹುದು.
ಏಡ್ಸ್ ಬಾರದಂತೆ ತಡೆಯಬೇಕಾದ್ದು ಮೊದಲ ಕಾರ್ಯ, ಹೀಗಾಗಿ ವಿವಾಹವಾಗುವವರ ಏಡ್ಸ್ ನೆಗೆಟಿವ್ ವರದಿ ಪಡೆಯುವುದು ಅತೀ ಅವಶ್ಯಕ. ಮುಂದೆ ರೋಗ ಇದ್ದವರು ಸರಿಯಾದ ಚಿಕಿತ್ಸೆ ಪಡೆದು ಆತ್ಮವಿಶ್ವಾಸದಿಂದ ದಿಟ್ಟ ಜೀವನ ನಡೆಸಬೇಕು.
ಲೇಖಕರು: ನಳಿನಾ ಚಿಕ್ಕಮಗಳೂರು