ಸಕಲೇಶಪುರ : ಅವಿನಾಶ್ ಕಾಕಡೆ ಮಾತನಾಡಿತ್ತಾ ಈ ಊರಿನ ತುಂಬಾ ನಶಾ ಮುಕ್ತ ಕೇಂದ್ರಗಳಿರಬೇಕೆ? ಅಥವಾ ಯುವಕರು ನಶೆಯಲ್ಲಿ ಮುಳುಗುವಂತ ಸ್ಥಳಗಳಿರಬೇಕೆ? ಮನುಷ್ಯನಿಗೆ ಎರಡು ಜರೂರುಗಳಿವೆ, ಬುದ್ದಿ ಪ್ರಣೀಕವಾದ ಅಗತ್ಯ, ಇನ್ನೊಂದು ದೈಹಿಕ ಪ್ರಣೀಕವಾದ ಅಗತ್ಯವಿದೆ.
“ಭೌತಿಕ ಜಗತ್ತಿಗೆ ಭೌತಿಕವಾದ ಅಗತ್ಯಗಳಿರುತ್ತವೆ. ಅವುಗಳನ್ನು ಕೂಡಲೇ ಪರಿಹರಿಸಲು ಸಾಧ್ಯವಿಲ್ಲ. ಬೌದ್ಧಿಕ ಅಗತ್ಯಗಳಾದ ರೊಟ್ಟಿ, ಶಿಕ್ಷಣ ಸೇರಿದಂತೆ ಹಲವು ಅಗತ್ಯತೆಗಳು ನಮಗೆ ಗೊತ್ತಿರುತ್ತವೆ, ಇವುಗಳನ್ನು ಹೊರತುಪಡಿಸಿ ಯೋಚನಾಶಕ್ತಿಗಳನ್ನು ಮಾಡುವಂತಹ ಭೌತಿಕ ಶಕ್ತಿ ನಮ್ಮಲ್ಲಿರಬೇಕು”
“ಸಮಾಜದಲ್ಲಿ ಉತ್ತಮವಾಗಿ ನೆಮ್ಮದಿಯಿಂದ ಬದುಕು ಸಾಧಿಸಬೇಕಾದರೆ ನಶಾ ಮುಕ್ತಗೊಳಿಸಿದಾಗ ಮಾತ್ರ ಸಾಧ್ಯ. ಉತ್ತಮ ಶಿಕ್ಷಣವನ್ನು ಪಡೆದಿರುವಂತಹ ಪೋಷಕರು ಮನೆಯಲ್ಲಿದ್ದಾಗ ಸಮಾಜದಲ್ಲಿದ್ದಾಗ ನಮ್ಮ ಮುಂದಿನ ಮಕ್ಕಳು ಉತ್ತಮ ಪ್ರಜೆಗಳಾಗಿ ಮಾರ್ಪಾಡಾಗುತ್ತದರೆ. ನಶೆಯಲ್ಲಿ ತೊಡಗಿರುವವರ ನಡುವೆ ಮಕ್ಕಳು ಬೆಳೆದಾಗ ಅವರನ್ನೇ ಅನುಸರಿಸುವ ಮೂಲಕ ಮಕ್ಕಳು ನಶೆ ಏರಿಸುವಂತಹ ಡ್ರಗ್ಸ್ಗಳಿಗೆ ಬಲಿಯಾಗುವುದರ ಜತೆಗೆ ದೇಶಕ್ಕೆ ಮಾರಕವಾಗುತ್ತಾರೆ”
ರಾಮಕೃಷ್ಣ ಹೆಗಡೆ, ಬಿ ಆರ್ ಪಾಟೀಲ್ ಅವರಿಂದ ಸ್ಪೂರ್ತಿಗೊಂಡಿದ್ದ ನಾನು 73 ವರ್ಷದ ಯುವಕ ವಿಶ್ವನಾಥ್ ಅವರಿಗೆ ನೂಲಿನ ಮಾಲೆಯನ್ನು ಸಮರ್ಪಿಸುತ್ತೇನೆ. ಪೂರಾ ದೇಶದ ಸಮಾಜವಾದಿ ಮಾಜಿ ಶಾಸಕ ವಿಶ್ವನಾಥ್ ಅವರು, ಯುವಕರಂತೆ ಚಳವಳಿಯಲ್ಲಿ ಉತ್ಸುಕತೆಯಿಂದಿರುವುದು ಶ್ಲಾಘನೀಯ ಎಂದರು.