ಕರ್ನಾಟಕ, ಅ.22: ಚಂದ್ರಯಾನ-3 ಮಿಷನ್ ಕುರಿತು ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಅವರ ವಿರುದ್ಧ ಹಿಂದೂ ಸಂಘಟನೆಗಳ ಮುಖಂಡರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಕಾಶ್ ರಾಜ್ ಅಗಸ್ಟ್ 20ರಂದು ಟ್ವೀಟರ್ ನಲ್ಲಿ “ಬ್ರೇಕಿಂಗ್ ನ್ಯೂಸ್:- ಚಂದ್ರನಿಂದ ಬಂದ ಮೊದಲ ಚಿತ್ರ #VikramLander ವಾವ್ #justasking” ಎಂದು ಚಹಾ ಮಾಡುವ ವ್ಯಕ್ತಿಯೊಬ್ಬನ ಕಾರ್ಟೂನ್ ಚಿತ್ರ ಹಂಚಿಕೊಂಡಿದ್ದರು. ಇದು ಕೇರಳದ ಚಾಯ್ವಾಲನ ಚಿತ್ರ ಎಂದು ಬರೆದುಕೊಂಡಿದ್ದಾರೆ.
BREAKING NEWS:-
— Prakash Raj (@prakashraaj) August 20, 2023
First picture coming from the Moon by #VikramLander Wowww #justasking pic.twitter.com/RNy7zmSp3G
ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮಲಯಾಳಿಯೊಬ್ಬ ಇರುತ್ತಾನೆ. ಚಂದ್ರನಲ್ಲಿ ಮೊದಲ ಬಾರಿಗೆ ನೀಲ್ ಆರ್ಮ್ ಸ್ಟ್ರಾಂಗ್ ಕಾಲಿಟ್ಟಾಗ ಅಲ್ಲೊಂದು ಮಲಯಾಳಿ ಚಹಾ ಅಂಗಡಿ ಇತ್ತು ಎಂಬ ಹಾಸ್ಯ ಚಟಾಕಿಯೊಂದು ಪ್ರಚಲಿತದಲ್ಲಿದೆ. ಇದು ಕೇರಳಿಗರು ಹರಡಿರುವ ವಿಸ್ತಾರವನ್ನು ತೋರಿಸುತ್ತದೆ ಎಂಬುದು ಟ್ವಿಟ್ ನ ಅರ್ಥವಾಗಿತ್ತು.
Hate sees only Hate.. i was referring to a joke of #Armstrong times .. celebrating our kerala Chaiwala .. which Chaiwala did the TROLLS see ?? .. if you dont get a joke then the joke is on you .. GROW UP #justasking https://t.co/NFHkqJy532
— Prakash Raj (@prakashraaj) August 21, 2023
ಇದೇ ದನಿಯಲ್ಲಿ ನಟ ಪ್ರಕಾಶ್ ರಾಜ್ ಮಾಡಿರುವ ಟ್ವೀಟನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲದವರು ಟ್ರೋಲ್ ಮಾಡಲು ಆರಂಭ ಮಾಡಿದ್ದು ಪ್ರಕರಣ ಕೂಡ ದಾಖಲಿಸಿದ್ದಾರೆ.