ಗುಜರಾತ್ : ಸೆಪ್ಟಂಬರ್ 10ರಂದು ಭರೂಚ್ ನಗರದಲ್ಲಿನ ಬಿ-ವಿಭಾಗದ ಪೊಲೀಸ್ ಠಾಣೆಯಲ್ಲಿ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಅಡಿಯಲ್ಲಿ ಅತ್ಯಾಚರ ಪ್ರಕರಣ ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಭರೂಚ್ ಎಎಸ್ಪಿ ವಿಕಾಸ್ ಸುಂದ ಅವರು ಮಾತನಾಡಿ, ಬಂಬಾಖಾನಾದ ಸರಸ್ವತಿ ವಿದ್ಯಾಮಂದಿರ ಶಾಲೆಯ ಪ್ರಾಂಶುಪಾಲ ರಂಜಿತ್ ಅಲಿಯಾಸ್ ರಾಕೇಶ್ ಪರ್ಮಾರ್ ಎಂಬಾತ, 9 ನೇ ತರಗತಿಯ ವಿದ್ಯಾರ್ಥಿನಿಯನ್ನು ತನ್ನ ಕಚೇರಿಯಲ್ಲಿ ಎರೆಡು ಬಾರಿ ಅತ್ಯಾಚಾರವೆಸೆಗಿದ್ದು, ಈ ಕುರಿತು ಯಾರಿಗಾದರು ಮಾಹಿತಿ ನೀಡಿದ್ದಲ್ಲಿ ವಿದ್ಯಾರ್ಥಿನಿಯನ್ನು ಪರೀಕ್ಷೆಯಲ್ಲಿ ಪೇಲ್ ಮಾಡುವುದಾಗಿ ಬೆದರಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.